College Contact

Door No: 2592/179, 5th Main, S. S. Layout, “B” Block, DAVANAGERE 577004 PH : 08192 224914 / 7022479444 | 7204879555 | 7204097666

ದಾವಣಗೆರೆಯ ಡಾ. ಮಹಾಂತಸ್ವಾಮಿ ಪದವಿ ಪೂರ್ವ ಕಾಲೇಜಿನಲ್ಲಿ ಒಂದು ದಿನದ ವಿಜ್ಞಾನ ಕಾರ್ಯಗಾರ.

ದಾವಣಗೆರೆಯ ಡಾ|| ಮಹಾಂತಸ್ವಾಮಿ  ಪದವಿ ಪೂರ್ವ ಕಾಲೇಜಿನಲ್ಲಿ 
ಒಂದು ದಿನದ ವಿಜ್ಞಾನ ಕಾರ್ಯಗಾರ. 



ಶಿಕ್ಷಕರು ನಮ್ಮ ದೇಶವನ್ನು ಕಟ್ಟುವ ಶಿಲ್ಪಿಗಳು ಹರ ಎಜುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಬಿಸಿ ಉಮಾಪತಿ ಇವರ ಆಶಯ . ದಿನಾಂಕ 03-09-2024ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ದಾವಣಗೆರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ,ಕ್ಷೇತ್ರ ಸಮನ್ವಯ ಸಂಪನ್ಮೂಲ ಕೇಂದ್ರ  ದಾವಣಗೆರೆ ತಾಲೂಕ್ (ದ. ವ) 

ಶ್ರೀ ಸರ್ ಸಿ ವಿ ರಾಮನ್ ವಿಜ್ಞಾನ ಕ್ಲಬ್ ದಾವಣಗೆರೆ ದಕ್ಷಿಣ ವಲಯ. 
ಇವರುಗಳ ಸಹಯೋಗದೊಂದಿಗೆ 

ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗೆ ಒಂದು ದಿನದ ವಿಜ್ಞಾನ ಕಾರ್ಯಗಾರವನ್ನು ಬೆಳಿಗ್ಗೆ 9:30 ರಿಂದ ಸಂಜೆ 4:30 ವರೆಗೆ ಹಮ್ಮಿಕೊಳ್ಳಲಾಗಿತ್ತು. 

ಈ ಕಾರ್ಯಗಾರದ ಉದ್ಘಾಟನೆಯನ್ನು ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಬಿಸಿ ಉಮಾಪತಿ ಸರ್ ಇವರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಾ. ಪುಷ್ಪಲತಾ ಮೇಡಂ ಇವರು ಗಿಡಕ್ಕೆ ನೀರನ್ನು ಹಾಕುವುದರೊಂದಿಗೆ ಮತ್ತು ರಾಸಾಯನಿಕ ದ್ರವವನ್ನುವನ್ನು ಬಳಸಿ ವಿಭಿನ್ನವಾಗಿ ಉದ್ಘಾಟಿಸಲಾಯಿತು. 

ಕ್ಲಬ್ಬಿನ ಅಧ್ಯಕ್ಷರಾದ ಶ್ರೀ ಶಿವಮೂರ್ತಿ ಸರ್ ಅವರು ಪ್ರಾಸ್ತವಿಕವಾಗಿ ಕ್ಲಬ್ಬಿನ ನಿರ್ವಹಣೆ ಬಗ್ಗೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು. 

ಡಾಕ್ಟರ್ ಪುಷ್ಪಲತಾ ಮೇಡಂ ಇವರು ವಿಜ್ಞಾನ ಶಿಕ್ಷಕರು ಕಾರ್ಯಾಗಾರದ ಸಂಪೂರ್ಣ ಜ್ಞಾನ ಪಡೆದು ವರ್ಗ ಕೋಣೆಗೆ ತಲುಪಿಸಿ, ವಿಜ್ಞಾನ ಎನ್ನುವುದು ವಿಶೇಷವಾದ ಜ್ಞಾನ ಪ್ರೌಢಶಾಲಾ ಹಂತದಲ್ಲಿಯೇ ಮಕ್ಕಳನ್ನು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿರಿ ಮಕ್ಕಳಿಗೆ ವಿಜ್ಞಾನದ ಕುತೂಹಲ ವಿಷಯಗಳನ್ನು ತಿಳಿಸಲು ಸದಾ ಚಟುವಟಿಕೆಯಲ್ಲಿ ನಿರತರಾಗಿರಿ ಸಮಯ ಪ್ರಜ್ಞೆ ಬೋಧನಾ ಕೌಶಲ್ಯತೆಯನ್ನು ಸಮಯ ಪ್ರಜ್ಞೆ  ಶಿಸ್ತನ್ನು  ಸದಾ ಬೆಳೆಸಿಕೊಳ್ಳಿ ರೆಂದು ಕಿವಿ ಮಾತು ಹೇಳಿದರು. 
ಸಂಸ್ಥೆಯ ನಿರ್ದೇಶಕರಾದ ಶ್ರೀ ಎಂ ದೊಡ್ಡಪ್ಪ ಇವರು ಮಾತನಾಡಿ ನಮ್ಮ ಕಾಲೇಜು ಯಾವುದೇ ಲಾಭಕ್ಕೋಸ್ಕರ ವಾಣಿಜ್ಯ ಉದ್ದೇಶಕ್ಕಾಗಿ ಸ್ಥಾಪಿಸಿಲ್ಲ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಬಲವರ್ಧನೆಗಾಗಿ ಸ್ಥಾಪಿಸಲಾಗಿದೆ.

ಅತಿ ಕಡಿಮೆ ದರದಲ್ಲಿ ಗುಣಮಟ್ಟದ ಶಿಕ್ಷಣವನ್ನು ಕೊಡುವಂತಹ ಉದ್ದೇಶವನ್ನು ಹೊಂದಿದ ಈ ಸಂಸ್ಥೆಯಾಗಿದೆ. ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು.
ಶ್ರೀ ಬಿಸಿ ಉಮಾಪತಿಯವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಶಿಕ್ಷಕರು ದೇಶವನ್ನು ಕಟ್ಟುವ ಶಿಲ್ಪಿಗಳು ಶಿಕ್ಷಕರಲ್ಲದೆ ಈ ಜಗತ್ತು ಪ್ರಗತಿ ಹೊಂದಲು ಸಾಧ್ಯವಿಲ್ಲ, ಶಿಕ್ಷಕರುನಮ್ಮೆಲ್ಲರಿಗೂ ಶಿಸ್ತಿನ ಅಡಿಪಾಯವನ್ನು ಹೇಳಿಕೊಳ್ಳುವ ಮಾರ್ಗದರ್ಶಕರಾಗಿದ್ದಾರೆ. ಈ ಕಾಲೇಜಿನಲ್ಲಿ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿಶೇಷವಾದ ಅವಕಾಶ ರಿಯಾಯಿತಿ ಶುಲ್ಕವನ್ನು ತೆಗೆದುಕೊಳ್ಳಲಾಗುತ್ತದೆ. ಯಾವುದೇ ವೈಯಕ್ತಿಕ ಲಾಭಕ್ಕೋಸ್ಕರ ಈ ಸಂಸ್ಥೆಯನ್ನು ಸ್ಥಾಪಿಸಿರುವುದಿಲ್ಲ .ಬಡ ವಿದ್ಯಾರ್ಥಿಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಬಡ ಪ್ರತಿಭೆಗಳಿಗೆ ಅನುಕೂಲವಾಗಲೆಂದು ಈ ಕಾಲೇಜನ್ನು ಪ್ರಾರಂಭಿಸಲಾಗಿದೆ. ಎಲ್ಲಾ ರೀತಿಯ ಸಕಲ ಸೌಲಭ್ಯಗಳನ್ನು ಒದಗಿಸುವ ಮುಖಾಂತರ ಈ ಕಾಲೇಜನ್ನು ಸ್ಥಾಪಿಸಲಾಗಿದೆ. ಈ ಸಂಸ್ಥೆ  ಬೆಳೆಯಲು ನಿಮ್ಮೆಲ್ಲರ ಸಹಕಾರ ಸೇವೆ ಅಗತ್ಯವಾಗಿದೆ ಎಂದು ತಿಳಿಸಿದರು. 
ಮುಖ್ಯ ಅತಿಥಿಗಳಾದ ಶ್ರೀ ಪುಷ್ಪಲತಾ ಮೇಡಂ ಇವರನ್ನು ಸನ್ಮಾನಿಸಲಾಯಿತು. ಶಿಕ್ಷಣ ಸಂಯೋಜಕರಾದ ಶ್ರೀ ಗೋವಿಂದರಾಜ್ ಅವರು ಇವರನ್ನು ಸಹ ಸನ್ಮಾನಿಸಲಾಯಿತು.
ವಂದನೆಗಳನ್ನು ಸಲ್ಲಿಸುವುದರ ಮೂಲಕ  ವೇದಿಕೆ ಕಾರ್ಯಕ್ರಮಕ್ಕೆ ವಿರಾಮ ಹೇಳಲಾಯಿತು. 

ಟೀ ವಿರಾಮದ ಬಳಿಕ ಸಮರ್ಥ ಕಾಲೇಜಿನ ಜೀವಶಾಸ್ತ್ರದ ಉಪನ್ಯಾಸಕರಾದ ಶ್ರೀನಿವಾಸ್ ರೆಡ್ಡಿ ಇವರು ಅನುವಂಶೀಯತೆ ಘಟಕದ  ಪರಿಕಲ್ಪನೆಗಳಾದ ಮೆಂಡಲ್ ನಿಯಮಗಳು ಏಕ ತಳಿಕರಣ ದ್ವಿತಳೀಕರಣ  ಚಕ್ಕರ್ ಬೋರ್ಡ ಲಿಂಗ ನಿರ್ಧಾರಣೆ ಜೀವವಿಕಾಸದ ಹಲವಾರು ಕ್ರಿಷ್ಟಾಂಶಗಳ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡಿದರು. ಶಿಕ್ಷಕರು ಕೇಳಿದಂತಹ  ಹಲವಾರು ಸಮಸ್ಯೆಗಳನ್ನು ಈ ಸಂದರ್ಭದಲ್ಲಿ ಚರ್ಚೆ ಮೂಲಕ ಉತ್ತರಿಸಿದರು. ಈ ಸಂಪನ್ಮೂಲ ವ್ಯಕ್ತಿಗಳ ಬೋಧನೆ ವಿಜ್ಞಾನ ಶಿಕ್ಷಕರಿಗೆ ಅರ್ಥಪೂರ್ಣವಾಗಿತ್ತು .


ಮಧ್ಯಾಹ್ನದ ಉಪಹಾರದ ನಂತರ ಎಲ್ಲಾ ವಿಜ್ಞಾನ ಶಿಕ್ಷಕರು 
ಕಾಲೇಜಿನಲ್ಲಿರುವ ಪ್ರಯೋಗಾಲಯ ,ಭೌತಿಕ ವಸ್ತುಗಳನ್ನು 
ಕೊಠಡಿಗಳನ್ನು ವೀಕ್ಷಣೆ ಮಾಡಿ ವಿವರಗಳನ್ನು ತಿಳಿದುಕೊಂಡರು. 
ಮಧ್ಯಾಹ್ನದ ಅವಧಿಯಲ್ಲಿ ಮತ್ತೋರ್ವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ವಿನಯ್ ಕುಮಾರ್ ಸರ್ ಇವರಿಂದ ಭೌತ ವಿಜ್ಞಾನದ ಘಟಕವಾದ ವಿದ್ಯುತ್ ಪ್ರವಾಹ ಕಾಂತೀಯ ಪರಿಣಾಮದಲ್ಲಿ 
ಫ್ಲೆಮಿಂಗಲ ನಿಯಮಗಳು 

ಕಾಂತಿಯ ಬಲ ರೇಖೆಗಳು ಬಲಗೈ ಹಿಡಿಗಟ್ಟು ನಿಯಮಗಳು, ಸೊಲೆನಾಯ್ಡ್ ,
ಇತ್ಯಾದಿ ಪರಿಕಲ್ಪನೆಗಳ ಕುರಿತು ಮಾಹಿತಿ ನೀಡಿದರು . ಘಟಕಕ್ಕೆ ಸಂಭಂದಿಸಿದಂತೆ ಹಲವಾರು ಕ್ಲಿಷ್ಟಾಂಶಗಳ ಕುರಿತು ಸಂವಾದ ನಡೆಸಿದರು ಶ್ರೀಯುತರ ಉಪನ್ಯಾಸ ಉಪಯುಕ್ತವಾಗಿತ್ತು.  ವಿಜ್ಞಾನ ಸಂಘದ  ಕಾರ್ಯದರ್ಶಿಗಳಾದ ಶ್ರೀ ಭೀಮಪ್ಪ ಸರ್ ಮತ್ತು ಎಲ್ಲಾ ಖಜಾಂಚಿಗಳಾದ ವಿರೂಪಾಕ್ಷಪ್ಪ ಸರ್ ಇವರುಗಳು ದಾಖಲಾತಿ ನಿರ್ವಹಿಸುವುದರ ಬಗ್ಗೆ, ಕ್ಲಬ್ಬಿನ ಕೆಲವು ಮಾಹಿತಿಗಳನ್ನ ತಿಳಿಸಿದರು.

ಸಮಯ ನಾಲ್ಕು ಗಂಟೆಗೆ  ಕಚೇರಿಯ ಶಿಕ್ಷಣ ಸಂಯೋಜಕರಾದ ಶ್ರೀ  ದತ್ತಾತ್ರೇಯ ಇವರು ಇನ್ಸ್ಪೈರ್ ಅವಾರ್ಡ್ ನಾಮಿನೇಷನ್ ಕುರಿತು, ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ಪ್ರಗತಿಪಡಿಸಲು ಕೆಲವು ಮಾರ್ಗೋಪಾಯಗಳನ್ನು ತಿಳಿಸಿದರು.  ಸಮೂಹ ಸಂಪನ್ಮೂಲ ವ್ಯಕ್ತಿಗಳಾದ  ಕೆ ಮೊಹಮ್ಮದ್ ಜಾಫರ್ ಇವರು ಯು ಯು ಡೈಸ್ ಬಗ್ಗೆ ಮಾಹಿತಿ ನೀಡಿದರು.  ಯುವ ಸ್ಪಂದನ ಇಲಾಖೆಯವರು ಆಗಮಿಸಿ ಕ್ರೀಡೆಯ  ಬಗ್ಗೆ ಮಾಹಿತಿ ನೀಡಿದರು.


ಶ್ರೀ ಮಲ್ಲಿನಾಥ್ ಸರ್ ಇವರು  ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಕಾಲೇಜನ್ನು ಅತ್ಯುತ್ತಮ ಗೊಳಿಸಲು ಏನಾದರೂ ಸಲಹೆಗಳಿದ್ದರೆ ತಾವುಗಳು ತಿಳಿಸಿ ಕಾಲೇಜಿಗೆ ತಾವುಗಳು ತಮ್ಮ ಬಿಡುವಿನ ಸಮಯದಲ್ಲಿ ಭೇಟಿ ಮಾಡಿ ಮಾರ್ಗದರ್ಶನ ನೀಡಲು ತಿಳಿಸಿದರು. 

ಸಮಾರೋಪ ಸಮಾರಂಭದಲ್ಲಿ ಎಲ್ಲಾ ಸಂಪನ್ಮೂಲ ವ್ಯಕ್ತಿಗಳಿಗೆ ಇಲಾಖೆಯ ಅಧಿಕಾರಿಗಳಿಗೆ  ಕ್ಲಬ್ಬಿನ ಅಧ್ಯಕ್ಷರಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

 ಶ್ರೀ ಮತಿ ಮೀನಾ ಕುಮಾರಿ ಮತ್ತು ತಂಡದವರು ಪ್ರಾರ್ಥಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಎಂ ಎಸ್ ದೇವರಾಜ್ ಅವರು ಸರ್ವರನ್ನು ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಹಾಗೂ ಕಾರ್ಯಗಾರದ ಆಯೋಜನೆಯನ್ನು   ಕೆ ಕೆ ನಾಗರಾಜ್ ಇವರು ನಿರ್ವಹಿಸಿದರು.

ಶಿಕ್ಷಕರಾದ ಶ್ರೀ ಮೇಘರಾಜ್ ಸರ್ ಅವರು ವಂದಿಸಿದರು.  
ಸಮಯ 4:45 ಕ್ಕೆ ಗ್ರೂಪ್ ಫೋಟೋ ದೊಂದಿಗೆ ಕಾರ್ಯಕ್ರಮಕ್ಕೆ ವಿರಾಮ ಹೇಳಲಾಯಿತು.

ವರದಿ 
ಕೆ ಕೆ ನಾಗರಾಜ್ , ಶಿಕ್ಷಕರು, 
ಕರ್ನಾಟಕ ಪಬ್ಲಿಕ್ ಸ್ಕೂಲ್ ಮಾಯಕೊಂಡ. 
ದಾವಣಗೆರೆ (ದಕ್ಷಿಣ ವಲಯ.)

No comments:

Post a Comment

ಡಾ. ಮಹಾಂತಸ್ವಾಮಿ ಪದವಿ ಪೂರ್ವ ಕಾಲೇಜು ದಾವಣಗೆರೆ Dr. MAHANTHASWAMY PU College Davanagere GD 00444

http://www.mspucdvg.com

http://www.mspucdvg.com